Saturday 24 September 2016

ಮಕ್ಕಳು - ಮಾನಸಿಕ ಒತ್ತಡಗಳು - ಕಾರಣಗಳು - ಸಲಹೆಗಳು


ಈಗಿನ ಓಟದ ಜಗತ್ತಿನಲ್ಲಿ, 'ಸ್ಪರ್ಧೆ'ಗೆ ಮೊದಲನೆಯ ಆಧ್ಯತೆ. ಒಬ್ಬರಿಗಿಂತ ಒಬ್ಬರು ಓದಿನಲ್ಲಿ, ದುಡ್ಡಿನಲ್ಲಿ, ಆಸ್ತಿಯಲ್ಲಿ, ಸಾಮಾಜಿಕ ಗೌರವ ಹೊಂದುವಲ್ಲಿ.. ಹೀಗೆ ಒಂದಲ್ಲ ಒಂದರಲ್ಲಿ ಅಕ್ಕಪಕ್ಕದವರೊಡನೆ ತಮ್ಮನ್ನು ಹೋಲಿಸಿಕೊಳ್ಳುತ್ತಾ.. ಅವರಿಗಿಂತ ನಾವು ಒಂದು ಕೈ ಮೇಲೇ ಇರಬೇಕು ಅನ್ನೋದನ್ನ ತಲೇಲಿ ಇರಿಸಿಕೊಂಡೇ ಜೀವನ ನಡೆಸುತ್ತಿರುತ್ತಾರೆ. ಜೀವನದಲ್ಲಿ ಖುಷಿಯಾಗಿರುವುದನ್ನೇ ಮರೆತಿದ್ದಾನೆ ಅನ್ಸುತ್ತೆ ಈ ಮನುಷ್ಯ. ಪ್ರಾಣಿಯಾಗಿದ್ದಾಗಲೇ ಆತನಿಗೆ ಹೆಚ್ಚು ಖುಷಿಯಿತ್ತೇನೋ ;) ಅನ್ನಿಸುತ್ತಿದೆ. ಮನುಶ್ಯತ್ವ ಗುಣದಿಂದಲೇ ಮಾನವನಾದ ಈ ಪ್ರಾಣಿ, ತನ್ನ ಸ್ಪರ್ಧಾ ಮನಸ್ಥಿತಿಯಿಂದ ಪ್ರಾಣಿಗಿಂತ ಕಡೆಯಾದ ನೀಚ ಪ್ರಾಣಿಯಾಗುತ್ತಿದ್ದಾನೆ. ಹಾಗೆ ಒತ್ತಡದ ಬದುಕನ್ನು ತನ್ನದಾಗಿಸಿಕೊಂಡಿದ್ದಾನೆ ಜೊತೆಗೆ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡಿದ್ದಾನೆ. ಹಾಗೆಯೇ ಅದೇ ಬದುಕನ್ನು ತನ್ನ ಮಕ್ಕಳಿಗೆ ಬಳುವಳಿಯಾಗಿ ಕೊಡುತ್ತಿದ್ದಾನೇನೋ ಅನ್ನುವ ಅನುಮಾನ ಬರದೆ ಇರಲ್ಲ.  




ಮಗುವಿನ ಅಸಹಜ ವರ್ತನೆಗಳಿಗೆ ಹಲವು ಕಾರಣಗಳಿರಬಹುದು.  ಲಂಡನ್ ನ ಮಾನಸಿಕ ತಜ್ಞರ ತಂಡವೊಂದು, ಈ ಬಗ್ಗೆ ಒಂದು ಸಂಶೋದನೆ ನಡೆಸಿತು. ಈ ಭಾಗವಾಗಿ ಅದು ಅಸಹಜ ವರ್ತನೆಯ ಮಕ್ಕಳ ಜೊತೆ ಅವರ ಹೆತ್ತವರನ್ನೂ ಪರೀಕ್ಷೆಗೆ ಒಳಪಡಿಸಿತು. ಇದರಿಂದ ಅಂದು ಕುತೂಹಲಕಾರಿಯಾದ ಅಂಶ ಹೊರ ಬಂತು. 

ಯಾವ್ಯಾವ ಮಕ್ಕಳು ಅಸಹಜವಾಗಿ, ಹಿಂಸಾತ್ಮಕವಾಗಿ ವರ್ತನೆ ಮಾಡುತ್ತಾರೋ ಅಂತಹ ಮಕ್ಕಳ ಹೆತ್ತವರು ಮಾನಸಿಕ ಒತ್ತಡಕ್ಕೆ ಮತ್ತು ಖಿನ್ನತೆಗೆ ಒಳಗಾಗಿದ್ದವರು ಮತ್ತು ಅಸಹಜ, ಹಿಂಸಾತ್ಮಕ ಪ್ರಕೃತಿಯವರೇ ಆಗಿದ್ದರು ಅನ್ನುವದನ್ನ ಈ ತಂಡ ಸ್ಪಷ್ಟವಾಗಿ ಗುರ್ತಿಸಿತು. ತಂದೆ-ತಾಯಿಯರಲ್ಲಿ ಮಾನಸಿಕ ಒತ್ತಡಗಳು ಮತ್ತು ಖಿನ್ನತೆಗಳು ಇದ್ದಾಗ ಅವರ ಮಕ್ಕಳು ಬೇರೆ ಮಕ್ಕಳಿಗಿಂತ ಎರಡು ಪಟ್ಟು ಬೇಗನೆ ಮಾನಸಿಕ ತೊಂದರೆಗಳಿಗೆ ಒಳಗಾಗುತ್ತಾರೆ ಎಂದು ಈ ವರದಿ ಹೇಳುತ್ತೆ. 





ತಂದೆ-ತಾಯಂದಿರಲ್ಲಿ ಕಂಡುಬಂದ ಮಾನಸಿಕ ಸಮಸ್ಯೆಗಳು--
ಕೆಲವು ತಂದೆತಾಯಂದಿರು ಸಿಟ್ಟಾದಾಗ ಕಿರುಚುವುದು, ಇಬ್ಬಗೆಯ / ಗೊಂದಲದ ಮನಸ್ಥಿತಿ, ತುಮುಲಗಳು, ಮಾನಸಿಕ ಒತ್ತಡ, ಕೆಟ್ಟ ಶಬ್ಧಗಳನ್ನು ಬಯ್ಯುವಾಗ ಬಳಸುವುದು ಮತ್ತು ಆತ್ಮಹತ್ಯೆಯಂತಹ ಅಪರಾಧಗಳು ಇಂತಹ ಮಾನಸಿಕ ಸಮಸ್ಯೆಗಳನ್ನು ಹೊಂದಿದ್ದರು. 


ಈ ಎಲ್ಲ ಸಮಸ್ಯೆಗಳು ಅವರ ಮಕ್ಕಳುಗಳಲ್ಲಿ, ಬೇರೆ ಮಕ್ಕಳಿಗಿಂತ ಎರೆಡುಪಟ್ಟು ಹೆಚ್ಚಾಗಿ ಮಾನಸಿಕ ಸಮಸ್ಯೆಗಳು ಇವರ ಮಕ್ಕಳುಗಳಲ್ಲಿ ಕಂಡುಬಂದಿವೆ. ಮಾನಸಿಕವಾಗಿ ಆರೋಗ್ಯದಿಂದಿರುವ ಮಕ್ಕಳ ತಂದೆ-ತಾಯಿಯರು ಈ ಮೇಲೆ ಸೂಚಿಸಿದ ಯಾವುದೇ ರೀತಿಯ ಮಾನಸಿಕ ತೊಂದರೆಗಳು ಕಂಡುಬಂದಿಲ್ಲ.


ತಂದೆ-ತಾಯಿಯರ ಮಾನಸಿಕ ಖಿನ್ನತೆಯ ಪರಿಣಾಮವಾಗಿ ಮಕ್ಕಳ ವ್ಯಕ್ತಿತ್ವ--
ಯಾವ ಮಕ್ಕಳ ತಂದೆತಾಯಿಯರ ಇತಿಹಾಸದಲ್ಲಿ ಮಾನಸಿಕ ಖಿನ್ನತೆಗಳು ಇರುತ್ತವೂ ಅಂಥಹ ಮಕ್ಕಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಮನೋಭಾವ ಮತ್ತು ತಮ್ಮನ್ನು ತಾವು ಹಿಂಸಿಸಿಕೊಳ್ಳುವ ಮನಸ್ಥಿತಿ  ಹೆಚ್ಚಾಗಿ ಕಂಡುಬಂದಿದೆ ಮತ್ತು ಸಮಾಜ ಘಾತುಕ ಕೆಲಸಗಳಲ್ಲಿ ಪಾಲ್ಗೊಳ್ಳುವವರು ಇವರೇ. ಉದಾಹರಣೆಗೆ ಕಳ್ಳತನ, ಕೊಲೆಗಾರ, ವ್ಯವಸ್ಥೆಯ ವಿರುಧ್ಧ ತಿರುಗಿಬೀಳುವ ಹೀಗೇ ಇನ್ನು ಹಲವು ವಿಕೃತ ಸಮಾಜ ವಿರೋಧಿ ಕೆಲಸಗಳಿಗೆ ಬೇಗ ಒಳಗಾಗುತ್ತಾರೆ. ಕೆಲವೊಮ್ಮೆ ಅವರ ಕೌಟುಂಬಿಕ ಕಲಹಗಳು, ಮಕ್ಕಳಿಗೆ ಕಿರಿಕಿರಿ ಎನಿಸುವ ಸಂಪ್ರದಾಯಗಳು, ಆರ್ಥಿಕ ಪರಿಸ್ಥಿತಿ ಇವೂ ಕೂಡ ಒಮ್ಮೊಮ್ಮೆ ಮಕ್ಕಳ ಮಾನಸಿಕ ಆರೋಗ್ಯ ಹಾಳಾಗಲು ಕಾರಣವಾಗಿರುತ್ತವೆ.

ಈ ಮಾನಸಿಕ ರೋಗಗಳಿಂದ ಮಕ್ಕಳನ್ನು ಹೇಗೆ ಕಾಪಾಡೋದು?
ಈ ರೀತಿಯ ಮಾನಸಿಕ ತೊಂದರೆಗೆ ಒಳಗಾದ ಮಕ್ಕಳ ಜೊತೆ ಕೂತು ಮಾತಾಡಿ. ಅವರ ಸಮಸ್ಯೆ ಏನೆಂದು ಗುರುತಿಸಿಕೊಳ್ಳಿ. ಕೆಲವೊಮ್ಮೆ ನಿಮ್ಮ ಬೆಚ್ಚಗಿನ ಪ್ರೀತಿಯ ಮಾತುಗಳು ಅವರಿಗೆ ಮಾನಸಿಕ ಗೊಂದಲಗಳಿಂದ ಆಚೆ ಬರಲು ಸಹಾಯಕವಾಗಬಹುದು. ಸಮಸ್ಯೆ ನಿಮ್ಮ ಕೈ ಮೀರಿ ಹೋಗಿದ್ದಲ್ಲಿ ಮಾನಸಿಕ ತಜ್ಞರೊಡನೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವುದು ಒಳ್ಳೆಯ ನಿರ್ಧಾರ.



ಮಕ್ಕಳನ್ನು ಮಾನಸಿಕ ಖಿನ್ನತೆಯಿಂದ ಹೊರತರಲು 8 ಸಲಹೆಗಳು--
  1. ಮಕ್ಕಳಲಾಗುವ ಬದಲಾವಣೆಗಳನ್ನು ಗಮನಿಸುತ್ತಿರಿ.
  2. ಮಕ್ಕಳ ನಡವಳಿಕೆಗಳನ್ನು ಎಲ್ಲ ದೃಷ್ಟಿಕೋನಗಳಿಂದ ಅಳೆದು ತೂಗಿ.
  3. ಹೊರಗಿನ ಪ್ರಪಂಚದಲ್ಲಿ ನಿಮ್ಮ ಮಕ್ಕಳ ನಡವಳಿಕೆಯ ಬಗ್ಗೆ ವಿಷಯ ಸಂಗ್ರಹಿಸಿ.
  4. ಮಕ್ಕಳೊಂದಿಗೆ ಗೆಳೆಯರಂತೆ ಇರಿ.
  5. ಮಕ್ಕಳು ನಿಮ್ಮೊಡನೆ ಮುಕ್ತವಾಗಿ ಮಾತಾಡಲು ಅವಕಾಶ ಕೊಡಿ. ಮಕ್ಕಳೊಡನೆ ನೀವು ಮಕ್ಕಳಾಗಿ.
  6. ಸಮಸ್ಯೆ ಗಂಭೀರ ವಾಗಿದ್ದರೆ ಮಾನಸಿಕ ತಜ್ಞರ ಜೊತೆ ಚರ್ಚಿಸಿ ಸಹಾಯ ಪಡೆಯಿರಿ.
  7. ಆತ್ಮಹತ್ಯೆಯ ವಿಶ್ಹಯವನ್ನು ಸಹ ನಿಮ್ಮ ಮಕ್ಕಳೊಡನೆ ಚರ್ಚಿಸಿ.
  8. ಮಕ್ಕಳ ನಡವಳಿಕೆಯ ಬಗ್ಗೆ ಒಂದು ಸೂಕ್ತ ನಿರ್ಧಾರ ತೆಗೆದುಕೊಳ್ಳಿ. ಮಕ್ಕಳ ನಿಲುವುಗಳನ್ನು ಗೌರವಿಸಿ. 


2 comments: